![](https://www.hindujagruti.org/kannada/wp-content/uploads/sites/13/2024/07/WhatsApp-Image-2024-07-20-at-8.55.28-PM.jpeg)
![](https://www.hindujagruti.org/kannada/wp-content/uploads/sites/13/2024/07/WhatsApp-Image-2024-07-20-at-8.55.29-PM.jpeg)
ದ್ವಾಪರಯುಗದಲ್ಲಿ ಜಗದ್ಗುರು ಭಗವಾನ್ ಶ್ರೀಕೃಷ್ಣನು ಶಿಷ್ಯ ಅರ್ಜುನನಿಗೆ ಅಮೂಲ್ಯ ಮಾರ್ಗದರ್ಶನ ನೀಡಿ, ಧರ್ಮದ ಪುರ್ನಸ್ಥಾಪನೆ ಮಾಡಿದರು. ಅದೇ ರೀತಿ ಕಲಿಯುಗದಲ್ಲಿ ನಾವೂ ಶ್ರೀಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಿಸಬೇಕಾಗಿದೆ. ಗುರುಕೃಪೆಯನ್ನು ಪಡೆಯಲು, ಶ್ರೀಗುರುಗಳ ಧರ್ಮಸಂಸ್ಥಾಪನೆಯ ಅರ್ಥಾತ್ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ನಾವೂ ಯೋಗದಾನ ನೀಡಬೇಕಿದೆ. ಈ ಕುರಿತು ವಿವರವಾಗಿ ಚರ್ಚಿಸಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸಿದೆ. ಈ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಶ್ರೀಗುರುಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸೋಣ. ತಮ್ಮ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಗುರುಪೂರ್ಣಿಮಾ ಮಹೋತ್ಸವದಲ್ಲಿ ತಪ್ಪದೇ ಪಾಲ್ಗೊಳ್ಳಿ !
ನೇರಪ್ರಸಾರ ವೀಕ್ಷಿಸಿ !
ಜುಲೈ 21, ಸಂಜೆ 4.30 ಕ್ಕೆ ಪ್ರಾರಂಭವಾಗುವುದು…
July 3, 2023, 7.30PM
July 3, 2023, 7.30PM
July 3, 2023, 7.00PM
July 3, 2023, 8.00PM
![](https://www.hindujagruti.org/hindi/wp-content/uploads/sites/2/2015/06/Gurupujan.jpg)
ಕಾರ್ಯಕ್ರಮದ ಸ್ವರೂಪ
ರಾಜ್ಯದಾದ್ಯಂತ ಆಯೋಜಿಸಲಾಗಿರುವ ಕಾರ್ಯಕ್ರಮಗಳ ವಿವರ
![](https://www.hindujagruti.org/hindi/wp-content/uploads/sites/2/2018/04/donate.jpg)
ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಲು ಸಮರ್ಪಿತ ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಈ ಗುರುಕಾರ್ಯ ಅಂದರೆ ದೈವೀಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದ್ದರಿಂದ ಜಿಜ್ಞಾಸುಗಳು, ಹಿತೈಷಿಗಳು ಧರ್ಮಪ್ರಸಾರ ಕಾರ್ಯವನ್ನು ಮಾಡಿ ಜೊತೆಗೆ ಧರ್ಮಕಾರ್ಯಕ್ಕಾಗಿ ಧನಸಹಾಯ ಮಾಡಿ, ಈ ಮೂಲಕ ಆಧ್ಯಾತ್ಮಿಕ ಸ್ತರದಲ್ಲಿ ಗುರುಪೂರ್ಣಿಮೆಯ ಲಾಭ ಪಡೆಯಿರಿ.
ಗುರುಪೂರ್ಣಿಮೆಯ ಅಧಿಕ ಲಾಭ ಪಡೆಯಲು ಮಾಡಬೇಕಾದ ಪ್ರಯತ್ನಗಳು
![](https://www.hindujagruti.org/hindi/wp-content/uploads/sites/2/2023/04/hindu_rashtra_sthapana.jpg)
ಗುರುಪೂರ್ಣಿಮೆ ನಿಮಿತ್ತ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡಲು ದೃಢ ಸಂಕಲ್ಪ ಮಾಡಿ !
ಯಾವ ರೀತಿ ರಾತ್ರಿಯ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಅದೇ ರೀತಿ ಕಾಲಮಹಿಮೆಗನುಸಾರ ನಡೆಯುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರ ಬಂದೇ ಬರುತ್ತದೆ, ಅದು ಶಿಲೆಯ ಮೇಲಿನ ಕೆತ್ತನೆಯಾಗಿದೆ. ಈ ಕುರಿತು ಅನೇಕ ಸಂತರು ಹೇಳಿದ್ದಾರೆ. ಕಾಲವೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಆದ್ದರಿಂದ, ಈ ಅವಧಿಯಲ್ಲಿ ನಾವು ಹಿಂದೂ ರಾಷ್ಟ್ರದ ಸ್ಥಾಪನೆಗೆ ಶ್ರಮಿಸಿದರೆ, ಕಾಲಾನುಸಾರ ಧರ್ಮಕಾರ್ಯವಾಗಿ ಆ ಮೂಲಕ ನಮ್ಮ ಸಾಧನೆಯಾಗುವುದು. ಆದ್ದರಿಂದ ಈ ವರ್ಷದ ಗುರುಪೂರ್ಣಿಮೆಯಂದು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಲು ನಿರ್ಧರಿಸಿರಿ.