Menu Close

` ನೇಪಾಳವಿರೋಧಿ ಶಕ್ತಿಗಳಿಂದ ವಿರೋಧವಿದ್ದರೂ, ನೇಪಾಳವು ಹಿಂದೂ ರಾಷ್ಟ್ರದತ್ತ ಮುಂದೆ ಸಾಗುತ್ತಿದೆ ! – ಶ್ರೀ. ಶಂಕರ ಖರಾಲ, ಹಿರಿಯ ಉಪಾಧ್ಯಕ್ಷ, ವಿಶ್ವ ಹಿಂದೂ ಮಹಾಸಂಘ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ’ : ಪತ್ರಿಕಾಗೋಷ್ಠಿ !

ಎಡದಿಂದ ಶ್ರೀ ವಿಠ್ಠಲ್ ಚೌಧರಿ, ಡಾ. ನಿಲೇಶ್ ಓಕ್, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಶ್ರೀ. ಶಂಕರ್ ಖರಾಲ ಮತ್ತು ರಸ ಆಚಾರ್ಯ ಡಾ. ಧರ್ಮಯ

ಇಂದು, ನೇಪಾಳದಲ್ಲಿ ಬಹುಸಂಖ್ಯಾತ ಹಿಂದೂ ಸಮಾಜವಿದ್ದರೂ, ಹಿಂದೂಗಳು ಮಾತ್ರ ಚೀನಾ, ಯುರೋಪ ಯೂನಿಯನ ಮುಂತಾದ ವಿದೇಶಿ ಶಕ್ತಿಗಳ ಆರ್ಥಿಕ ಸಹಾಯದಿಂದಾಗಿ ಅವರ ಆಲೋಚನೆಗಳಿಗೆ ಅನುಗುಣವಾಗಿ ಕಾರ್ಯ ಮಾಡುತ್ತಿದ್ದಾರೆ. ಹಾಗೆಯೇ ಭಾರತದ ಮೂಲಭೂತವಾದಿ ಎಡಪಂಥೀಯ ಸಿದ್ಧಾಂತದ ಕೆಲವು ವಿಶ್ವವಿದ್ಯಾಲಯಗಳಿಂದ ಹಿಂದೂವಿರೋಧಿ ಸಿದ್ಧಾಂತದ ಕಾರ್ಯಕರ್ತರು ನೇಪಾಳಕ್ಕೆ ಬಂದು ಹಿಂದೂವಿರೋಧಿ ಹಾಗೂ ನಕ್ಸಲವಾದಿ ಕಾರ್ಯ ಮಾಡುತ್ತಿದ್ದಾರೆ. ಆದರೂ ನೇಪಾಳದಲ್ಲಿ ಮೊದಲಿಗಿಂತ ಹಿಂದೂ ಸಂಘಟನೆಗಳು ಹೆಚ್ಚಿವೆ. ಹಿಂದುತ್ವಕ್ಕಾಗಿ ಕೆಲಸ ಮಾಡುವ ಪಕ್ಷವನ್ನು ಎಲ್ಲಾ ಹಿಂದೂಗಳು ಬೆಂಬಲಿಸುತ್ತಿದ್ದಾರೆ. ಆದರೂ ನೇಪಾಳವು ಹುರುಪಿನಿಂದ ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಮುಂದೆ ಸಾಗುತ್ತಿದೆಯೆಂದು ನೇಪಾಳದ ವಿಶ್ವ ಹಿಂದೂ ಮಹಾಸಂಘದ ಹಿರಿಯ ಉಪಾಧ್ಯಕ್ಷ ಶ್ರೀ. ಶಂಕರ ಖರಾಲ ಇವರು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು. ಅವರು `ಶ್ರೀ ರಾಮನಾಥ ದೇವಸ್ಥಾನ’ ಫೋಂಡಾ, ಗೋವಾದ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ಆಯೋಜಿಸಲಾದ ‘ ಜಾಗತಿಕ ಮಟ್ಟದ ಹಿಂದೂ ಸಂಘಟನೆ’ ಈ ವಿಷಯದ ಮೇಲಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಇಂಡೋನೇಷಿಯಾದ ಬಾಲಿಯಿಂದ ರಸ ಆಚಾರ್ಯ ಡಾ.ಧರ್ಮಯಶಾ, ಅಮೇರಿಕೆಯ ‘ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸ್’ ನಿಂದ ಡಾ.ನಿಲೇಶ ಓಕ್ , ದೆಹಲಿಯ ‘ಯೂತ್ ಫಾರ್ ಪನೂನ ಕಾಶ್ಮೀರ’ ಸಂಘಟನೆಯ ದಿಲ್ಲಿಯ ಅಧ್ಯಕ್ಷರಾದ ಶ್ರೀ. ವಿಠ್ಠಲ ಚೌಧರಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಉಪಸ್ಥಿತರಿದ್ದರು. ಆಫ್ರಿಕಾದ ‘ಇಸ್ಕಾನ್’ನ ಶ್ರೀವಾಸ ದಾಸ ವನಚಾರಿ ಅವರು ಪತ್ರಿಕಾಗೋಷ್ಠಿಗಾಗಿ ತಮ್ಮ ವೀಡಿಯೊ ಸಂದೇಶವನ್ನು ಕಳುಹಿಸಿದ್ದರು.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಭಾಗವಹಿಸಿದ ಕರ್ನಾಟಕದ ಹಿಂದುತ್ವನಿಷ್ಠರು

ಸನಾತನ ಧರ್ಮದಿಂದಾಗಿ ಜಾಗತಿಕ ಮಟ್ಟದಲ್ಲಿ ಹಿಂದೂಗಳ ಸಂಘಟನೆ ಸಾಧ್ಯ !

ಈ ಸಂದರ್ಭದಲ್ಲಿ ಅಮೇರಿಕಾದ `ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸ್‌’ನ ಡಾ.ನಿಲೇಶ ಓಕ್ ಮಾತನಾಡುತ್ತಾ, ಹಿಂದೂ ಧರ್ಮದ ವಿಜ್ಞಾನವನ್ನು ಮೂಢನಂಬಿಕೆ ಎಂದು, ಹಾಗೆಯೇ ರಾಮ-ಕೃಷ್ಣಾದಿ ಅವತಾರಗಳು ಕಾಲ್ಪನಿಕವಾಗಿವೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ವಾಸ್ತವವಾಗಿ, ಇಂದಿನ ಆಧುನಿಕ ವಿಜ್ಞಾನದ, ಖಗೋಳಶಾಸ್ತ್ರದ ಆಧಾರದ ಮೇಲೆ ಅವುಗಳ ಕಾಲಾವಧಿಯನ್ನು ನಿರ್ಧರಿಸಬಹುದು. ಆದ್ದರಿಂದ ವಿಜ್ಞಾನದ ಆಧಾರದಲ್ಲಿ ಈ ಅಪಪ್ರಚಾರಗಳಿಗೆ ಉತ್ತರ ನೀಡುವುದು ಮತ್ತು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾಬೀತುಪಡಿಸುವುದು ಸುಲಭ ಸಾಧ್ಯವಿದೆ. ಆ ದೃಷ್ಟಿಯಿಂದ ಪ್ರತಿಯೊಬ್ಬರೂ ಸನಾತನ ಧರ್ಮವನ್ನು ಕಲಿಯಲು ತಮ್ಮ ಮನೆಗಳಿಂದಲೇ ವಿಶೇಷವಾಗಿ ಚಿಕ್ಕ ಮಕ್ಕಳಿಂದ ಪ್ರಾರಂಭಿಸಬೇಕು’, ಎಂದರು.

ಈ ಸಂದರ್ಭದಲ್ಲಿ ಇಂಡೋನೇಷ್ಯಾದ ಬಾಲಿಯಿಂದ ರಸ ಆಚಾರ್ಯ ಡಾ.ಧರ್ಮಯಶ ಅವರು ಮಾತನಾಡುತ್ತಾ, `ನಮ್ಮ ಮುಂದಿನ ಪೀಳಿಗೆಯೇ ನಮ್ಮ ಭವಿಷ್ಯವಾಗಿದೆ. ಅವರಿಗೆ ನಾವು ಭಗವದ್ಗೀತೆ, ರಾಮಾಯಣ ಮತ್ತು ವೈದಿಕ ಸಂಪ್ರದಾಯಗಳ ಶಿಕ್ಷಣವನ್ನು ನೀಡಿ ಪ್ರಾಚೀನ ಸಂಸ್ಕೃತಿಯನ್ನು ಕಲಿಸಬೇಕು. ಆಗ ನಾವು ನಮ್ಮ ಉತ್ತಮ ಭವಿಷ್ಯವನ್ನು ನೋಡಬಹುದು, ಎಂದರು.

ಆಫ್ರಿಕಾದ `ಇಸ್ಕಾನ್‌’ ನ ಶ್ರೀವಾಸ ದಾಸ ವನಚಾರಿ ಅವರು ಪತ್ರಿಕಾಗೋಷ್ಠಿಗೆ ನೀಡಿದ ತಮ್ಮ ಸಂದೇಶದಲ್ಲಿ, `ಜಾಗತಿಕ ಮಟ್ಟದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸುವ ಪ್ರಮಾಣ ಹೆಚ್ಚಾಗಿದೆ. ಹಿಂದೂ ಧರ್ಮಗ್ರಂಥಗಳನ್ನು ಅಭ್ಯಾಸ ಮಾಡಲಾಗುತ್ತದೆ. ಭಗವದ್ಗೀತೆಯ ಅದ್ಭುತ ಜ್ಞಾನವನ್ನು ಅರಿತುಕೊಂಡ ನಂತರ, ಘಾನಾ (ದಕ್ಷಿಣ ಆಫ್ರಿಕಾ) ದ ಅನೇಕ ಚರ್ಚ್‌ಗಳಲ್ಲಿ ಫಾದರಗಳಿಂದ ಗೀತೆಯ ಜ್ಞಾನವನ್ನು ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ‘ ಯೂತ್ ಫಾರ್ ಪನೂನ ಕಾಶ್ಮೀರ’ ಸಂಘಟನೆಯ ದೆಹಲಿಯ ಅಧ್ಯಕ್ಷರಾದ ಶ್ರೀ. ವಿಠ್ಠಲ ಚೌಧರಿ ಮಾತನಾಡುತ್ತಾ `ಇಂದಿಗೂ ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಕಾಶ್ಮೀರದ ನಂತರ ಈ ಭಯೋತ್ಪಾದಕರ ದಾಳಿಗಳು ಜಮ್ಮುವಿನತ್ತ ವಾಲಿದೆ. ‘ಪನೂನ ಕಾಶ್ಮೀರ’ ರಚನೆಯ ಮೂಲಕ ಕಾಶ್ಮೀರಿ ಪಂಡಿತರ ಪುನರ್ವಸತಿ ಸಾಧ್ಯವಿದೆ. ಈ ‘ಪನೂನ ಕಾಶ್ಮೀರ’ ಸ್ಥಾಪನೆಯಲ್ಲಿ ಭಾರತೀಯ ಮತ್ತು ಸನಾತನ ಹಿಂದೂ ಧರ್ಮೀಯರು ಪ್ರಮುಖ ಪಾತ್ರ ವಹಿಸುವರು. ಕಾಶ್ಮೀರದ ಸಮಸ್ಯೆಯ ಕುರಿತು ಮಾರ್ಗವನ್ನು ಕಂಡು ಹಿಡಿಯಲು ಯಾವ ರೀತಿ ಹಿಂದೂಗಳೆಲ್ಲ ಒಗ್ಗೂಡಿ ‘ಏಕ ಭಾರತ ಅಭಿಯಾನ, ಚಲೋ ಕಾಶ್ಮೀರ ಕಿ ಓರ್’ ಎಂಬ ಅಭಿಯಾನ ನಡೆಸಿದ್ದರೋ ಅದನ್ನು ಮತ್ತೊಮ್ಮೆ ಜಾರಿಗೆ ತರುವ ಆವಶ್ಯಕತೆಯಿದೆ. ಕಾಶ್ಮೀರಿ ಹಿಂದೂಗಳ ನರಮೇಧವನ್ನು ಒಪ್ಪಿಕೊಂಡು, ಸರಕಾರ ಕಾಶ್ಮೀರಿ ಹಿಂದೂಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು, ಎಂದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ಮಾತನಾಡುತ್ತಾ, `ಭಾರತವನ್ನು ತೊರೆದು ಹೋಗಿರುವ ಜನರು ಮತ್ತೆ ಭಾರತಕ್ಕೆ ಮರಳುತ್ತಿದ್ದಾರೆ. ಇತರ ಧರ್ಮದ ಜನರು ದೊಡ್ಡ ಪ್ರಮಾಣದಲ್ಲಿ ಸನಾತನ ಧರ್ಮದತ್ತ ಮುಖ ಮಾಡುತ್ತಿದ್ದಾರೆ. ಕೇವಲ ಭಾರತೀಯ ಯೋಗ, ಅಧ್ಯಾತ್ಮ, ಆಯುರ್ವೇದ ಮಾತ್ರವಲ್ಲ, ಬದಲಾಗಿ ಸಮೃದ್ಧ ಮತ್ತು ಪರಿಪೂರ್ಣ ಸನಾತನ ಭಾರತೀಯ ಜ್ಞಾನದಿಂದಾಗಿ ಅವರು ಪ್ರಭಾವಿತರಾಗಿ ಸನಾತನ ಧರ್ಮದ ಕಡೆಗೆ ಆಕರ್ಷಿಸಲ್ಪಡುತ್ತಿದ್ದಾರೆ. ಸಮಾಧಾನವನ್ನು ಪಡೆಯಲು ಭಾರತೀಯ ಸಂಸ್ಕೃತಿಯಂತೆ ಆಚರಣೆ ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯು ಜಾಗತಿಕ ಮಟ್ಟದಲ್ಲಿ ಎಲ್ಲ ಧರ್ಮಗಳನ್ನು ಒಗ್ಗೂಡಿಸಲು ಸಾಧ್ಯವಿದೆ. ಅದನ್ನು ಪ್ರಸಾರ ಮಾಡುವುದು ಅವಶ್ಯಕವಿದೆ; ಆದ್ದರಿಂದಲೇ ` ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗುತ್ತಿದೆ.

Related News