Menu Close

ಹಿಂದೂಗಳ ವಿರುದ್ಧ ಸೈದ್ಧಾಂತಿಕ ಯುದ್ಧವನ್ನು ಜಯಿಸಲು ನ್ಯಾಯವಾದಿಗಳ ‘ಈಕೋ ಸಿಸ್ಟಮ್’ ಅಗತ್ಯ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನ!

ಎಡದಿಂದ – ಶ್ರೀ. ಸೋಹನ್ ಲಾಲ್ ಆರ್ಯ, ನ್ಯಾಯವಾದಿ ವಿಷ್ಣು ಶಂಕರ ಜೈನ್, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಪೂ. ನ್ಯಾಯವಾದಿ ಸುರೇಶ್ ಕುಲಕರ್ಣಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನ್ಯಾಯವಾದಿಗಳ ಕೊಡುಗೆ ಅನನ್ಯವಾಗಿದೆ. ಲೋಕಮಾನ್ಯ ತಿಲಕ, ಸರದಾರ ವಲ್ಲಭಭಾಯಿ ಪಟೇಲ, ಸ್ವಾತಂತ್ರವೀರ ಸಾವರಕರ, ಲಾಲಾ ಲಜಪತ ರಾಯ, ದೇಶಬಂಧು ಚಿತ್ತರಂಜನ ದಾಸ ಮುಂತಾದ ಅನೇಕ ನ್ಯಾಯವಾದಿಗಳು ಆ ಸಮಯದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಗಳನ್ನು ಮಾಡಿದರು. ಇದೇ ರೀತಿ ಹಿಂದೂ ನ್ಯಾಯವಾದಿಗಳ ಸಂಘಟನೆ ಸಕ್ರಿಯವಾದರೆ, ಭವಿಷ್ಯದಲ್ಲಿ ಹಿಂದೂ ರಾಷ್ಟ್ರ ಖಂಡಿತವಾಗಿಯೂ ಸ್ಥಾಪನೆಯಾಗುತ್ತದೆ. ಇಂದು ವಿರೋಧಿಗಳು ನ್ಯಾಯಾಲಯದ ಮೂಲಕ ಸೈದ್ಧಾಂತಿಕ ಯುದ್ಧವನ್ನು ಪ್ರಾರಂಭಿಸಿದ್ದಾರೆ, ಆದ್ದರಿಂದ ಹಿಂದೂಗಳ ಪರವಾಗಿ ಕಾನೂನುಬದ್ಧವಾಗಿ ಸುದೃಢವಾಗಿರಲು ಸೈದ್ಧಾಂತಿಕ ಯೋಧರ ಅಗತ್ಯವಿದೆ. ಧರ್ಮ ಸಂಸ್ಥಾಪನೆಯ ಈ ಕಾರ್ಯದಲ್ಲಿ ಕೊಡುಗೆ ನೀಡಲು ಹಿಂದೂ ನ್ಯಾಯವಾದಿಗಳು ` ಈಕೋ ಸಿಸ್ಟಮ್ ರಚಿಸುವುದು ಆವಶ್ಯಕವಾಗಿದೆಯೆಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ಕರೆ ನೀಡಿದರು. ಅವರು “ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ದ ಆರನೇ ದಿನದಂದು ` ಹಿಂದೂ ರಾಷ್ಟ್ರದ ಕಾರ್ಯದಲ್ಲಿ ನ್ಯಾಯವಾದಿಗಳ ಕೊಡುಗೆ’ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ. ವಿನೀತ ಜಿಂದಾಲ

ಭಾರತಕ್ಕಾಗಿ ಕ್ರಿಕೆಟ್ ಒಂದು ಆಟ; ಆದರೆ ಪಾಕಿಸ್ತಾನಕ್ಕೆ ಅದು ‘ಜಿಹಾದ್’! – ನ್ಯಾಯವಾದಿ ವಿನೀತ ಜಿಂದಾಲ
‘ಕ್ರಿಕೆಟ್ ಜಿಹಾದ್’ ಕುರಿತು ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಾಲ ಮಾತನಾಡಿ, “ಭಾರತದಲ್ಲಿ ಕ್ರಿಕೆಟ್ ಅನ್ನು ಕ್ರೀಡಾ ಮನೋಭಾವದಿಂದ ಆಡಲಾಗುತ್ತದೆ; ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಆಟವು ಪಾಕಿಸ್ತಾನಕ್ಕೆ ಮಾತ್ರ ಯುದ್ಧದಂತಿರುತ್ತದೆ. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ‘ಭಾರತದ ವಿರುದ್ಧ ಕ್ರಿಕೆಟ್ ಆಡುವುದು ಜಿಹಾದ್’ ಎಂದು ಹೇಳುತ್ತಿದ್ದರು. ಇತ್ತೀಚೆಗೆ ಪಾಕಿಸ್ತಾನದ ಓರ್ವ ಬ್ಯಾಟ್ಸ್ಮನ್ ತನ್ನ ಶತಕವನ್ನು ‘ಪ್ಯಾಲೆಸ್ತೀನ’ಗೆ ಅರ್ಪಿಸಿದ್ದನು. ಆದ್ದರಿಂದ ಈ ಜಿಹಾದ್ ವಿರುದ್ಧ ಹಿಂದೂಗಳೂ ಎಚ್ಚರದಿಂದಿರಬೇಕು’ ಎಂದರು

ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಹಿಂದೂ ಜನಜಾಗೃತಿ ಸಮಿತಿ

ಪ್ರಸ್ತುತ ಕಾನೂನುಗಳು ಕುಟುಂಬ ವ್ಯವಸ್ಥೆಯನ್ನು ನಾಶಪಡಿಸುತ್ತವೆ; ಅದಕ್ಕಾಗಿಯೇ ಹಿಂದೂಗಳು ಕೌಟುಂಬಿಕ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ ನಿವಾರಿಸಬೇಕು !- ಪ್ರಾ. ಮಧು ಪೌರ್ಣಿಮಾ ಕಿಶ್ವರ
ಭಾರತದ ಹಿಂದೂ ಸಮಾಜವನ್ನು ಕುಟುಂಬವ್ಯವಸ್ಥೆಯನ್ನು ಮುರಿಯಲು ಆಂಗ್ಲರ ಕಾಲದಲ್ಲಿ ಮತ್ತು ಸ್ವಾತಂತ್ರ‍್ಯಾ ನಂತರವೂ ವಿವಿಧ ರೀತಿಯ ಕಾನೂನುಗಳನ್ನು ತರಲಾಯಿತು. ಭಾರತದಲ್ಲಿ ಮಹಿಳೆಗೆ ದೇವಿಯ ಸ್ಥಾನವಿದೆ. ಆದರೆ ಭಾರತದ ಮೇಲಾದ ಇಸ್ಲಾಮಿಕ್ ಆಕ್ರಮಣದ ನಂತರ ಹಿಂದೂ ಮಹಿಳೆಯ ಸಂರಕ್ಷಣೆಗಾಗಿ, ಹಿಂದೂಗಳಲ್ಲಿ ಬಾಲ್ಯವಿವಾಹ, ಪರದೆ ಮುಂತಾದ ರೂಢಿಗಳು ಬಂದವು. ಕ್ರೈಸ್ತ ಧರ್ಮಪ್ರಚಾರಕರು ಮತ್ತು ಕಥಿತ ಸಮಾಜ ಸುಧಾರಕರು ಇವರು ಈ ರೂಢಿಗಳನ್ನು ಘಾತಕವೆಂದು ನಿರ್ಧರಿಸಿ ಅದನ್ನು ನಿಲ್ಲಿಸಲು ಅದರ ವಿರುದ್ಧ ಕಾನೂನುಗಳನ್ನು ಮಾಡಿದರು. ಬಲಾ‌ತ್ಕಾರ, ಕೌಟುಂಬಿಕ ದೌರ್ಜನ್ಯ, ಇವುಗಳ ಕುರಿತಾದ ನಕಲೀ ಖಟ್ಲೆಗಳಿಂದ ಅನೇಕ ಕುಟುಂಬಗಳು ನಾಶವಾಗುತ್ತಿವೆ ಮತ್ತು ಅನೇಕ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಮಾಜಸೇವೆಯ ಬುರ್ಖಾ ಹೊದ್ದಿರುವ ಸ್ವಯಂಸೇವಾ ಸಂಸ್ಥೆಗಳು ಈ ವ್ಯವಸ್ಥೆಯನ್ನು ಮುರಿಯಲು ಪ್ರುಯತ್ನಿಸುತ್ತಿವೆ. ಹಿಂದೂಗಳು ಕುಟುಂಬ ವ್ಯವಸ್ಥೆಯ ಸಂರಕ್ಷಣೆಗಾಗಿ ತಮ್ಮ ಸಮಸ್ಯೆಗಳನ್ನು ಕೌಟುಂಬಿಕ ಸ್ತರದಲ್ಲಿಯೇ ಸಮಾಲೋಚನೆಯಿಂದ ಪರಿಹರಿಸಲು ಪ್ರಯತ್ನಿಸಿದರೆ ಕುಟುಂಬ ಮತ್ತು ಸಮಾಜ ಒಗ್ಗಟ್ಟಿನಿಂದ ಉಳಿಯುತ್ತದೆ ಎಂದು ದಿಲ್ಲಿಯ ಪ್ರಸಿದ್ದ ಲೇಖಕಿ ಪ್ರಾ. ಮಧು ಪೌರ್ಣಿಮಾ ಕಿಶ್ವರ ಇವರು ಪ್ರತಿಪಾದಿಸಿದರು.

Related News