ಜ್ವಾಜಲ್ಯಮಾನ ರಾಷ್ಟ್ರಭಕ್ತಿಯ ಪ್ರತೀಕ : ನೇತಾಜಿ ಸುಭಾಷಚಂದ್ರ ಬೋಸ್


ಭಾರತೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಅನೇಕ ಕ್ರಾಂತಿಕಾರರು ತಮ್ಮ ಬಲಿದಾನದಿಂದ ಸ್ವಂತದ್ದೇ ಆದ ವಿಶಿಷ್ಟವಾದ ಸ್ಥಾನಮಾನವನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಎಲ್ಲ ಕ್ರಾಂತಿಕಾರರಲ್ಲಿ ಕೇವಲ ಭಾವನೆಗಳಿಗೆ ಬಲಿಯಾಗದೇ ವಿವೇಕಬುದ್ಧಿಯ ಸಹಾಯದಿಂದ ನೀವು ನನಗೆ ರಕ್ತವನ್ನು ಕೊಡಿರಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುವೆನು ಎಂಬ ಆಹ್ವಾನಕಾರೀ ಕರೆಯನ್ನು ನೀಡುತ್ತಾ ತಮ್ಮಲ್ಲಿರುವ ತೇಜೋಮಯ ಕ್ಷಾತ್ರತೇಜಸ್ಸು ಮತ್ತು ಕೌಶಲ್ಯಪೂರ್ಣ ಸಂಘಟನೆಯ ದರ್ಶನವನ್ನು ನೀಡಿದವರೇನೇತಾಜಿ ಸುಭಾಷಚಂದ್ರ ಬೋಸ್. ಭಾರತೀಯರನ್ನು ಸಂಘಟಿಸಿ ಅವರನ್ನು ಬಲಾಢ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಕ್ರಾಂತಿಯ ದಿಕ್ಕಿನಲ್ಲಿ ಹೊರಳಿಸಿದಂತಹ ಮಹಾನ್ ನೇತಾರರೆಂದು ಸುಭಾಷಚಂದ್ರರ ಸ್ಥಾನವು ಇತಿಹಾಸದಲ್ಲಿ ಅಮರವಾಗಿದೆ. ಈನೇತಾರರ ಜನ್ಮದಿನದಂದು ಅವರ ಕ್ರಾಂತಿಕಾರ್ಯದ ಕಿರುಪರಿಚಯವನ್ನು ಮಾಡಿಕೊಳ್ಳುವಂತಹ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.

ಇಂದು ಭಾರತವು ಸ್ವತಂತ್ರವಾಗಿದ್ದರೂ ಸಹ ಇಂದಿಗೂ ಚೀನಾ, ಪಾಕಿಸ್ತಾನದಂತಹ ಬಾಹ್ಯಶತ್ರುಗಳು ಮತ್ತು ಸ್ವಕೀಯರೇ ಆಗಿರುವಂತಹ ರಾಷ್ಟ್ರ ಮತ್ತು ಧರ್ಮದ್ರೋಹಿ ಶಕ್ತಿಗಳು ಅದನ್ನು ಕೊರೆದುಹಾಕಿವೆ. ಆದುದರಿಂದ ಇಂದಿಗೂ ದೇಶದಲ್ಲಿ ದೇಶವಾಸಿಗಳು ಸಂಘಟಿತರಾಗಿ ಅವರಲ್ಲಿ ರಾಷ್ಟ್ರತೇಜಸ್ಸನ್ನು ಜಾಗೃತಗೊಳಿಸುವ ಅವಶ್ಯಕತೆಯಿದೆ. ಸುಭಾಷಚಂದ್ರರನ್ನು ಒಬ್ಬ ವ್ಯಕ್ತಿಯೆಂದು ನೋಡುವುದಕ್ಕಿಂತ ರಾಷ್ಟ್ರಭಕ್ತಿಯ ಒಂದು ಸಾಕಾರ ಮೂರ್ತಿಯ ಉದಾಹರಣೆಯೆಂದು ನೋಡುವುದು ಹೆಚ್ಚು ಯೋಗ್ಯವಾಗಿರುತ್ತದೆ. ಸುಭಾಷಚಂದ್ರರು ಎಂದರೆ ರಾಷ್ಟ್ರಜಾಗೃತಿಗಾಗಿ ಅವಶ್ಯವಿರುವಂತಹ ದೈವೀಗುಣಗಳ ಸಂಗ್ರಹವೇ ಆಗಿದ್ದರು. ರಾಷ್ಟ್ರಭಕ್ತಿಯನ್ನು ಜಾಗೃತಿಗೊಳಿಸಲು ಗುಣಗಳನ್ನು ಅಧ್ಯಯನ ಮಾಡಿ ಅವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದೇ ಅವರ ಚರಣಗಳಿಗೆ ಅರ್ಪಿಸುವಂತಹ ಆದರದ ಶ್ರದ್ಧಾಂಜಲಿಯಾಗಿರುತ್ತದೆ.

ಉತ್ತುಂಗ ರಾಷ್ಟ್ರಭಕ್ತಿಯ ಧ್ಯೇಯ ಮತ್ತು ಅದರಲ್ಲಿದ್ದ ಅಚಲ ಶ್ರದ್ಧೆ

ನೇತಾಜಿ ಸುಭಾಷಚಂದ್ರಬೋಸ್ ಜೀವನದಲ್ಲಿ ಒಂದೇ ಒಂದು ಧ್ಯೇಯವಿತ್ತು ಅದುವೇ ಭಾರತದ ಸ್ವಾತಂತ್ರ್ಯ. ಜೀವನದ ಕೊನೆಯವರೆಗೆ ಅನೇಕ ರೀತಿಯ ಅಡಚಣೆಗಳು ಬಂದರೂ ಅವರು ತಮ್ಮ ಧ್ಯೇಯದಿಂದ ಯಾವತ್ತೂ ವಿಚಲಿತರಾಗಲಿಲ್ಲ. ಸಂದರ್ಭದಲ್ಲಿ ತಮ್ಮ ೧೯ನೆಯ ವಯಸ್ಸಿನಲ್ಲಿ ತಮ್ಮ ಮಿತ್ರರಿಗೆ ಬರೆದ ಒಂದು ಪತ್ರದಲ್ಲಿ ಅವರು, ‘ನನ್ನ ಜೀವನದಲ್ಲಿ ಖಂಡಿತವಾದ ಧ್ಯೇಯವೊಂದಿದೆ ಎಂದು ನನಗೆ ದಿನ ಹೋದಂತೆ ಅನಿಸುತ್ತದೆ. ಜನರ ಮತಪ್ರವಾಹದಲ್ಲಿ ಕೊಚ್ಚಿಹೋಗುವವನು ನಾನಲ್ಲ. ಜನರು ನನ್ನನ್ನು ಒಳ್ಳೆಯವನು ಎನ್ನಬಹುದು ಅಥವಾ ಕೆಟ್ಟವನೆನ್ನ ಬಹುದು. ಅದು ಜಗತ್ತಿನ ನ್ಯಾಯವೇ ಆಗಿದೆ. ಆದರೆ ನನ್ನ ಸದ್ವಿವೇಕಬುದ್ಧಿಯಿಂದ ನಾನು ಮುಂದುವರಿಯುವುದರಿಂದ ನಾನು ವಿಚಲಿತನಾಗುವುದಿಲ್ಲಎಂದು ಹೇಳಿದ್ದಾರೆ.

ಅಗಮ್ಯ ಆಶಾವಾದ ಮತ್ತು ವಿಜಿಗಿಷು ವೃತ್ತಿ

ದ್ವಿತೀಯ ಮಹಾಯುದ್ಧದಲ್ಲಿ ಜರ್ಮನ ಮತ್ತು ಜಪಾನ್ ಸೋತ ಬಳಿಕ ಹತಾಶರಾಗದೇ ಅವರು ತಮ್ಮ ಸಹಚರರಿಗೆ, ‘ಮಿತ್ರರೇ, ಆಣಿಬಾಣಿಯ ಪ್ರಸಂಗದಲ್ಲಿ ನಾನು ಆಜ್ಞೆಯ ಒಂದೇ ಶಬ್ದವನ್ನು ನಿಮಗೆ ಹೇಳುತ್ತೇನೆ. ಒಂದು ವೇಳೆ ನೀವು ಪರಾಜಯಗೊಂಡರೆ ಸ್ವಾಭಿಮಾನದಿಂದ ಮತ್ತು ಶಿಸ್ತಿನಿಂದ ಅದನ್ನು ಸ್ವೀಕರಿಸಿರಿ. ಹಿಂದೂಗಳ ಭಾವೀ ಪೀಳಿಗೆಯು ನಿಮ್ಮ ಅನುಪಮ ತ್ಯಾಗದಿಂದ ಸ್ವತಂತ್ರರಾದಾಗ ಅವರು ನಿಮಗೆ ಧನ್ಯವಾದವನ್ನು ನೀಡುವರು ಮತ್ತು ಅತ್ಯಂತ ಗೌರವದಿಂದ ಜಗತ್ತಿಗೆ, ನಮ್ಮ ಪೂರ್ವಜರು ಅಸ್ಸಾಮ, ಮಣಿಪುರ, ಬ್ರಹ್ಮದೇಶಗಳಲ್ಲಿ ಹೋರಾಡಿದರು. ಆಗ ಅವರು ಸೋತುಹೋಗಿದ್ದರೂ ತಾತ್ಕಾಲಿಕ ಪರಾಭವದಿಂದ ಅವರು ಅಂತಿಮ ಯಶಸ್ಸು ಮತ್ತು ಕೀರ್ತಿಯ ಮಾರ್ಗವನ್ನು ನಮಗೆ ತೋರಿಸಿಟ್ಟಿದ್ದರು ಎಂದು ಹೇಳುವರು. ಭಾರತದ ಸ್ವಾತಂತ್ರ್ಯದ ಕುರಿತಾದ ನನ್ನ ಶ್ರದ್ಧೆಯು ಅಚಲವಾಗಿದೆ. ಭಾರತದ ನೀವು ಮುಂಚೂಣಿಯಲ್ಲಿರುವ ಸ್ವಾತಂತ್ರ್ಯ ಸೈನಿಕರು ತಮ್ಮ ಪ್ರಾಣಗಳ ಬೆಲೆತೆತ್ತು ರಾಷ್ಟ್ರದ ಮಾನವನ್ನು ಶಾಶ್ವತವಾಗಿ ಕಾಪಾಡಬಹುದು ಎನ್ನುವುದರಲ್ಲಿ ನನಗೆ ಸಂದೇಹವಿಲ್ಲಎಂದು ಹೇಳಿದ್ದರು. ಇದರಿಂದ ನೇತಾಜಿಯವರಲ್ಲಿ ಪರಾಭವದಲ್ಲಿಯೂ ವಿಜಯವನ್ನು ಕಾಣುವ ಸಕಾರಾತ್ಮಕ ವೃತ್ತಿಯು ಕಾಣಿಸುತ್ತದೆ.

ಅದ್ಭುತವಾದಂತಹ ನಿರ್ಭಯೆ ಮತ್ತು ಅದರಿಂದ ಬಂದಂತಹ ಧೀರೋದಾತ್ತ ವೃತ್ತಿ

ನೇತಾಜಿ ಸುಭಾಷಚಂದ್ರಬೋಸ್ ಸಾಹಸೀ ವೃತ್ತಿಯನ್ನು ತೋರಿಸುವಂತಹ ಅನೇಕ ಪ್ರಸಂಗಗಳು ಅವರ ಜೀವನದಲ್ಲಿ ಘಟಿಸಿದವು. ಹೆಚ್ಚಿನವರಿಗೆ ಅವರ ಜೀವನವೇ ಸಾಹಸ ಮತ್ತು ಅದ್ಭುತ ನಿರ್ಭಯತನದ ಆವಿಷ್ಕಾರವೆಂದೆನಿಸುತ್ತದೆ. ಅವರಲ್ಲಿರುವ ಸಾಹಸೀ ವೃತ್ತಿ ಎಂದರೆ ಹಾಲ್ವೆಲ ಸ್ಮಾರಕ ಪ್ರಕರಣದಲ್ಲಿ ಬ್ರಿಟಿಷರ ಬಂಧನದಿಂದ ಅವರು ಪಲಾಯನ ಮಾಡಿದ್ದು. ಬಂಧನದಲ್ಲಿದ್ದಾಗ ಅವರ ಮನಸ್ಥಿತಿಯು ಅತ್ಯಂತ ಅಸ್ವಸ್ಥವಾಗಿತ್ತು. ಪರಿಸ್ಥಿತಿಯಲ್ಲಿ ಬಹಳ ವಿಚಾರಗಳಲ್ಲಿ ಅವರು ವ್ಯಕ್ತಪಡಿಸಿದಂತಹ ಮನೋಗತವು ಅತ್ಯಂತ ಪ್ರಬೋಧನಾತ್ಮಕವಾಗಿದೆ. ಅವರು, ಸಂಪೂರ್ಣವಾಗಿ ವಿಚಾರದ ನಂತರ ನನ್ನ ಬುದ್ಧಿಯಿಂದ ಪರಿಸ್ಥಿತಿಗೆ ಶರಣಾಗುವಂತಹ ವೃತ್ತಿಯನ್ನು ತನ್ನ ಹೃದಯದಿಂದ ಯಾವತ್ತೋ ತೊಲಗಿಸಿಬಿಟ್ಟಿದ್ದರು. ಏಕೆಂದರೆ ಸ್ವತಃ ಅನ್ಯಾಯವನ್ನು ಆಚರಿಸುವುದಕ್ಕಿಂತ ತಮ್ಮ ಮೇಲೆ ಹೇರಲಾದ ಅನ್ಯಾಯಕರ ಕೃತ್ಯಗಳ ಮುಂದೆ ತಲೆತಗ್ಗಿಸುವುದು ನಿಂದನೀಯವಾಗಿದೆ. ಅರ್ಥಾತ್ ಅನ್ಯಾಯದ ಪ್ರತಿಕಾರವನ್ನು ಮಾಡಲೇ ಬೇಕು ಎಂಬುದು ಅವರ ಧೋರಣೆಯಾಗಿತ್ತು.

ಆತ್ಮಸಮರ್ಪಣೆಯ ಹಿಂದಿನ ತತ್ತ್ವಜ್ಞಾನ

ಸ್ವಾತಂತ್ರ್ಯಪ್ರಾಪ್ತಿಗಾಗಿ ಆತ್ಮಸಮರ್ಪಣೆಯನ್ನು ಮಾಡುವಂತಹ ಸತತ ಸಿದ್ಧತೆಯಿರುವಂತಹ ಸುಭಾಷಚಂದ್ರರ ವಿಚಾರಗಳು ಮುಂದಿನಂತಿವೆ. ಆತ್ಮಯಜ್ಞವು ಯಾವತ್ತೂ ನಿಷ್ಫಲವಾಗುವುದಿಲ್ಲ. ಎಲ್ಲ ಕಾಲಗಳಲ್ಲಿ ಎಲ್ಲ ರಾಷ್ಟ್ರಗಳಲ್ಲಿ ಒಂದೇ ಒಂದು ನಿಯಮವು ಶಾಶ್ವತವಾಗಿ ವಿಜಯೀಯಾಗಿರುವುದು ಕಂಡುಬರುತ್ತದೆ. ಹುತಾತ್ಮರ ರಕ್ತಮಾಂಸದಿಂದಲೇ ಯಶಸ್ಸಿನ ಮಂದಿರಗಳನ್ನು ಕಟ್ಟಲಾಗುತ್ತದೆ ಎನ್ನುವುದೇ ನಿಯಮವಾಗಿದೆ. ನಶ್ವರವಾದ ಜಗತ್ತಿನಲ್ಲಿ ಪ್ರತಿಯೊಂದು ವಿಷಯವು ನಾಶವಾಗುವಂತಹದ್ದಾಗಿದೆ. ಕೇವಲ ವಿಚಾರಗಳು ಮತ್ತು ಧ್ಯೇಯಗಳು ಮಾತ್ರ ನಾಶಹೊಂದುವುದಿಲ್ಲ. ಒಬ್ಬ ವಿಚಾರವಂತರ ಹಿಂದೆ ಬಿದ್ದು ಯಾವುದಾದರೊಬ್ಬ ವ್ಯಕ್ತಿಯು ಮೃತ್ಯು ಹೊಂದಬಹುದು, ಆದರೆ ಅವರ ಮೃತ್ಯುವಿನ ನಂತರ ಅದೇ ವಿಚಾರವು ಜನರಲ್ಲಿ ಅವತರಿಸುವುದು. ಇದೇ ರೀತಿ ವಿಶ್ವಚಕ್ರವು ತಿರುಗುತ್ತದೆ. ಒಂದು ಪೀಳಿಗೆಯ ತತ್ತ್ವಜ್ಞಾನವನ್ನು ಅಳವಡಿಸಿಕೊಂಡು ಇನ್ನೊಂದು ಪೀಳಿಗೆಯು ಯಶಸ್ವಿಯಾಗುತ್ತಿರುತ್ತದೆ. ನಮ್ಮ ತತ್ತ್ವಗಳ ಪುನರ್ಜನ್ಮವಾಗುವುದು ಎನ್ನುವುದಕ್ಕಿಂತ ಹೆಚ್ಚು ಸಮಾಧಾನವು ಬೇರೊಂದು ಇರಲಾರದು. ಆದುದರಿಂದ ತ್ಯಾಗದಲ್ಲಿಯೇ ನಾವು ಯಾವುದೇ ವಿಷಯವನ್ನು ಕಳೆದುಕೊಂಡು ಕುಳಿತುಕೊಳ್ಳುವುದಿಲ್ಲ, ಏಕೆಂದರೆ ಅದರ ಫಲವು ದುಪ್ಪಟ್ಟಾಗಿ ಸಿಗುತ್ತದೆ. ವ್ಯಕ್ತಿಯ ಮೃತ್ಯುವನ್ನು ಸ್ವೀಕರಿಸುವುದರಿಂದ ಒಂದು ವೇಳೆ ರಾಷ್ಟ್ರವು ಜೀವಂತವಾಗುವುದಾದರೆ ಅದನ್ನು ಅತ್ಯಗತ್ಯವಾಗಿ ಸ್ವೀಕರಿಸಬೇಕು. ಹಿಂದೂಸ್ಥಾನವು ಸ್ವತಂತ್ರವಾಗಬೇಕು ಎಂದು ಇಂದು ನಾನು ಮೃತ್ಯು ಮುಖದಲ್ಲಿ ಹಾರುತ್ತಿದ್ದೇನೆ. ಇದು ಅವರ ತತ್ತ್ವಜ್ಞಾನವಾಗಿತ್ತು ಅವರ ದೃಷ್ಟಿಯಿಂದ ರಾಷ್ಟ್ರಕ್ಕಾಗಿ ಮೃತ್ಯು ಎಂದರೆ ಒಂದು ಅವಕಾಶವೇ ಆಗಿತ್ತು.

ಕಾರ್ಯಕ್ಕೆ ಈಶ್ವರೀ ಅಧಿಷ್ಠಾನವಿರುವುದು ಮತ್ತು ಅದರಿಂದಲೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವು ಉಂಟಾಗುವುದು

ಸುಭಾಷಚಂದ್ರರ ಮೇಲೆ ಚಿಕ್ಕಂದಿನಿಂದಲೂ ರಾಮಕೃಷ್ಣಾದಿ ಸಾಧು ಸಂತರ ತತ್ತ್ವಜ್ಞಾನದ ನೆರಳು ಬಿದ್ದಿತ್ತು. ಆದುದರಿಂದ ಸಹಜವಾಗಿಯೇ ಅವರ ಕಾರ್ಯಕ್ಕೆ ಈಶ್ವರೀ ಅಧಿಷ್ಠಾನವಿರುತ್ತದೆ ಎನ್ನುವುದು ಅವರ ಹೇಳಿಕೆಯಿಂದ ಪದೇ ಪದೇ ಸ್ಪಷ್ಟವಾಗುತ್ತದೆ. ಮಂಡಾಲೆಯ ಕಾರಾಗೃಹದಲ್ಲರುವಾಗ ಅವರ ಕುರಿತಾದ ವಿಚಾರಗಳು ಅತ್ಯಂತ ಆತ್ಮೀಯ ವಾದುದಾಗಿವೆ. ನನ್ನ ಮನಸ್ಥಿತಿಯು ಅತ್ಯಂತ ಶಾಂತವಾಗಿದೆ. ಪರಮೇಶ್ವರನು ದಾರಿಯನ್ನು ತೋರಿಸುವನು ಮತ್ತು ದೀಪಕ್ಕೆ ಮುಖ ಕೊಡುವ ಸಾಮರ್ಥ್ಯವು ನನ್ನಲ್ಲಿ ಉತ್ಪನ್ನವಾಗಿದೆ. ತಮ್ಮ ವಿಚಾರ, ಧ್ಯೇಯ, ಕಲ್ಪನೆ ಕಲ್ಪಾಂತದಲ್ಲಿಯೇ ನಾಶವಾಗುವುದಿಲ್ಲ. ಮುಂದಿನ ಪೀಳಿಗೆಗೆ ಅದರ ಉಪಯೋಗವಾಗದೇ ಇರಲಾರದು. ಇದೇ ಆತ್ಮವಿಶ್ವಾಸದ ಮೇಲೆ ನಾನು ಮುಂಬರುವ ಕ್ಲೇಶಗಳನ್ನು ಮತ್ತು ಆಪತ್ತುಗಳನ್ನು ಸಹಿಸಬಲ್ಲೆನು.

ಆಝಾದ್ ಹಿಂದ್ ಪೌಜನ ಸೈನಿಕರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಿಂದ ಅವರ ಮುಂದಿನ ವಾಕ್ಯಗಳನ್ನು ಆರಿಸಲಾಗಿದೆ. – ಈಶ್ವರನ ಕೃಪೆಯಿದ್ದರೆ ಶತ್ರುವಿನ ನಡುವಿನಿಂದಲೂ ನಾವು ದಾರಿಯನ್ನು ಹುಡುಕಬಹುದು. ಯಾರು ಸ್ವಾತಂತ್ರ್ಯದ ಮಾರ್ಗದಲ್ಲಿ ಹೋಗುತ್ತಿದ್ದಾರೆಯೋ ಅವರ ಹಿಂದೆ ಪರಮೇಶ್ವರನು ನಿಂತುಕೊಂಡಿರುತ್ತಾನೆ, ಅವನು ನಮಗೆ ಯಶಸ್ಸನ್ನು ದೊರಕಿಸಿಕೊಡುತ್ತಾನೆ.

ಸಾತತ್ಯ, ಜಿಗುಟುತನ, ಪರಾಕ್ರಮದ ಪರಾಕಾಷ್ಠೆ

ಸ್ವಾತಂತ್ರ್ಯದ ಚಳುವಳಿಯಲ್ಲಿ ಸೇರಿದ ನಂತರ ಮೃತ್ಯುವಿನ ದ್ವಾರದವರೆಗೆ ಅವರು ಸ್ವಾತಂತ್ರ್ಯಪ್ರಾಪ್ತಿಗಾಗಿ ಅವಿರತವಾಗಿ ಶ್ರಮಿಸಿದರು. ಅದರಲ್ಲಿ ಅವರು ತಮ್ಮ ಪ್ರಕೃತಿ ಸ್ವಾಸ್ಥ್ಯದ ಕುರಿತು ಯಾವತ್ತೂ ವಿಚಾರ ಮಾಡಲಿಲ್ಲ. ಬ್ರಿಟಿಷ ಸಾಮ್ರಾಜ್ಯಶಾಹಿಯ ವಿರುದ್ಧ ಅವಿರತವಾಗಿ ದುಡಿದ ವೀರರೆಂದು ಜನರು ಅವರತ್ತ ನೋಡುತ್ತಾರೆ. ಮಹಾತ್ಮಾ ಗಾಂಧಿಯವರೂ ಅವರ ಬಗ್ಗೆ ತೆಗೆದ ಉದ್ಗಾರವು ಅತ್ಯಂತ ಜನಪ್ರಿಯವಾಗಿದೆ. – ಸುಭಾಷಬಾಬುರವರ ಸಾಹಸವು ಮತ್ತು ಪರಾಕ್ರಮವು ನನಗೆ ಅವರು ಹಿಂದೂಸ್ಥಾನವನ್ನು ಬಿಟ್ಟುಹೋದ ಬಳಿಕ ತಿಳಿದುಬಂತು.

ಅಪೂರ್ವ ಸಂಘಟನಾ ಕೌಶಲ್ಯ

ಶೂರ ಪುರುಷರು ಒಬ್ಬರೇ ಇದ್ದಾಗಲೂ ಸೂರ್ಯನಂತೆ ತಮ್ಮ ತೇಜಸ್ಸಿನಿಂದ ಇಡೀ ಭೂಮಂಡಲವನ್ನು ಆಕ್ರಮಿಸಿಕೊಂಡು ಬಿಡುತ್ತಾರೆ. ಸುಭಾಷಚಂದ್ರರ ತೇಜಸ್ಸಿನ ದರ್ಶನವಾದ ಬಳಿಕ ಮಹಾತ್ಮಾ ಗಾಂಧಿಯವರು ಅವರ ಬಗ್ಗೆ ತೆಗೆದ ಉದ್ಗಾರವು ಮುಂದಿನಂತಿದೆ. – ಸುಭಾಷಚಂದ್ರರ ಸಂಘಟನಾ ಕೌಶಲ್ಯದ ಮತ್ತು ಧೈಯದ ಕಲ್ಪನೆಯು ಅವರು ಹಿಂದೂಸ್ಥಾನವನನ್ನು ಬಿಟ್ಟು ಹೋದ ಬಳಿಕ ಗೊತ್ತಾಯಿತು. ಬ್ರಿಟಿಷ ಸಾಮ್ರಾಜ್ಯಶಾಹಿಯ ಕಾಲದಲ್ಲಿ ಭಾರತದ ಹೊರಗೆ ಹೋಗಿ ಶತ್ರುರಾಷ್ಟ್ರದೊಂದಿಗೆ ಒಬ್ಬರೇ ಮಾತನಾಡಿ ಅವರ ಸಹಾಯದಿಂದ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಕಿತ್ತೊಗೆಯಲು ಸಂಘಟನೆಯನ್ನು ಕಟ್ಟುವುದು ಇದರಿಂದ ಅವರ ಶ್ರೇಷ್ಠವಾದ ಮುತ್ಸದ್ಧಿತನವು ಕಂಡುಬರುತ್ತದೆ.

ಆದರ್ಶ ನೇತಾರ

ನೇತಾರರು ಸಮೂಹದೆದುರು ಆದರ್ಶವನ್ನು ಇಡಬೇಕೆಂಬ ರೀತಿಯಲ್ಲಿ ಅವರ ವರ್ತನೆಯಿತ್ತು. ರಣಾಂಗಣದಲ್ಲಿಯೂ ಅವರು ಸೈನಿಕರೊಂದಿಗೆ ಇರುತ್ತಿದ್ದರು. ಒಂದು ಸಲ ಯುದ್ಧ ವಿಮಾನದಿಂದ ಮಶೀನ್ಗನ್ ಹೊಡೆತವಾಗುತ್ತಿರುವಾಗಲೂ ಅವರು ತಮ್ಮ ಸಹಚರರೊಂದಿಗೆ ರಣಾಂಗಣದಲ್ಲಿ ನಿಂತುಕೊಂಡಿದ್ದರು. ಸಹಚರರು ಅವರು ಅಡಗುವಂತೆ ವಿನಂತಿಸುತ್ತಿದ್ದರು. ಆಗ ಅವರು ನಿರಾಕರಿಸುತ್ತಾ, ನನ್ನೆದುರು ನಿಂತಿರುವ ಮೂರುಸಾವಿರ ಮಂದಿ ಹೆದರದೇ ಇಲ್ಲಿ ನಿಂತುಕೊಂಡಿರುಗ ನಾನೇಕೆ ಹೆದರಬೇಕು ಎಂದಿದ್ದರು. ಅವರು ಕಾರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡಿ ಸ್ವಂತದ ಪ್ರಕೃತ್ತಿಯತ್ತಲೂ ನಿರ್ಲಕ್ಷ್ಯ ಮಾಡಿದರು. ಅವರಿಗೆ ಊಟ ತಿಂಡಿಗೆ ನಿಗದಿತ ಸಮಯವಿರುತ್ತಿರಲಿಲ್ಲ. ಸೈನಿಕರು ಯಾವ ರೀತಿಯ ಆಹಾರವನ್ನು ತಿನ್ನುತ್ತಿದ್ದರೋ ಅದನ್ನೇ ಅವರು ತಿನ್ನುತ್ತಿದ್ದರು. ಇಂತಹ ರೀತಿಯಿಂದ ಸುಭಾಷಚಂದ್ರ ಬೋಸರು ಜನ್ಮದತ್ತ ನೇತಾರರಾಗಿದ್ದರು. ಲೋಕಮಾನ್ಯ ತಿಲಕರು ಮತ್ತು ಛತ್ರಪತಿ ಶಿವಾಜಿಯವರು ಅವರಿಗೆ ಆದರ್ಶರಾಗಿದ್ದರು.ಇಂದಿನ ಲೇಖನವನ್ನು ಕೇವಲ ಓದಿ ಬಿಟ್ಟು ಬಿಡದೇ ಅಥವಾ ಮಾಹಿತಿಯನ್ನು ಪಡೆದುಕೊಂಡು ಇಡದೇ ಕೃತಿಯನ್ನು ಮಾಡಬೇಕಾದುದಾಗಿದೆ. ನಮ್ಮ ಮಾತೃಭೂಮಿಯ ಮತ್ತು ಧರ್ಮದ ದಯನೀಯ ಸ್ಥಿತಿಯನ್ನು ನೋಡಿ ಎದ್ದೇಳಿರಿ, ಅವುಗಳ ರಕ್ಷಣೆಗಾಗಿ ಕೈಯಲ್ಲಿ ಶಸ್ತ್ರವನ್ನು ಹಿಡಿದುಕೊಂಡು ಸಿದ್ಧರಾಗಿರಿ. ಅದೇ ಇಂದಿನ ಕಾಲದ ಅವಶ್ಯಕತೆಯಾಗಿದೆ.

ಆಧಾರ:ಸುಭಾಷ, ಲೇಖಕರು: ಭಾ.ಕೃ. ಕೆಳಕರ, ಕಾಂಟಿನೆಂಟಲ್ ಪ್ರಕಾಶನ, ಪುಣೆ, ಪ್ರಥಮಾವೃತ್ತಿ ೧೯೪೬, ಸಂಕಲನಕಾರರು: ಡಾ.ಮಂಗಲ ಕುಮಾರ ಕುಲಕರ್ಣೀ, ಪುಣೆ.