![](https://hindujagruti.org/hinduism-for-kids-kannada/wp-content/uploads/sites/6/2015/01/1308731038_Mudgal Fort 4.jpg)
ಮುದ್ಗಲ ಕೋಟೆಯು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಋಷಿಗಳಲ್ಲಿ ಏಳು ಬ್ರಹ್ಮರ್ಷಿಗಳು ಮತ್ತು ಇಬ್ಬರು ರಾಜರ್ಷಿಗಳಿದ್ದಾರೆ. ವಿಶ್ವಾಮಿತ್ರ ಋಷಿ ಒಬ್ಬ ರಾಜರ್ಷಿಯಾಗಿದ್ದರೆ ಮತ್ತೊಬ್ಬರು ಮುದ್ಗಲ ಋಷಿ. ಇವರು ತುಂಬಾ ಉದಾರಿಗಳು ಮತ್ತು ಕರುಣಾಮಯಿಯಾಗಿದ್ದರು. ಇವರು ಮುದ್ಗಲೋಪನಿಷತ್ ಎಂಬ ಉಪನಿಷತ್ ಬರೆದಿದ್ದಾರೆ. ಮುದ್ಗಲ ಕೋಟೆಯಲ್ಲಿ ಅಶ್ವಥನಾರಾಯಣ, ಶ್ರೀ ವೆಂಕಟೇಶ್ವರ, ನರಸಿಂಹ ಮತ್ತು ದಿಡ್ಡೇರಾಯರ ದೇವಸ್ಥಾನಗಳಿವೆ. ಮುದ್ಗಲ ಋಷಿ ಶಿಲಾಯುಗದವರಾಗಿದ್ದಾರೆ. ನಂತರ ೧೧ನೇ ಶತಮಾನದಲ್ಲಿ ದೇಶದ ಹಲವೆಡೆಯಿಂದ ಮಕ್ಕಳು ಬಂದು ಇಲ್ಲಿ ಕಲಿಯುತ್ತಿದ್ದರು.