![](https://hindujagruti.org/hinduism-for-kids-kannada/wp-content/uploads/sites/6/2015/01/1308732920_bangalore-fort-picture-02.jpg)
ವಿಜಯನಗರ ಸಂಸ್ಥಾನದ ಸಾಮಂತರಾಜನಾಗಿದ್ದ ಕೆಂಪೇಗೌಡ ಇವರು ಮಣ್ಣಿನ ಕೋಟೆಯೊಂದನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ನಿರ್ಮಿಸಿದರು. ನಂತರ ೧೭೬೧ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು. ೨೧ ಮಾರ್ಚ್ ೧೭೯೧ ರಂದು ಮೂರನೇ ಮೈಸೂರಿನ ಯುದ್ಧದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಟಿಪ್ಪು ಸುಲ್ತಾನನನ್ನು ಸೋಲಿಸಿ ಈ ಕೋಟೆಯನ್ನು ತನ್ನ ವಶಕ್ಕೆ ಪಡೆದುಕೊಂಡಿತು.