ರಕ್ಷಾ ಬಂಧನ

ಶ್ರಾವಣ ಪೂರ್ಣಿಮೆಯಂದು ರಕ್ಷಾಬಂಧನ ಹಬ್ಬವನ್ನು ಆಚರಿಸುತ್ತಾರೆ. ಹಿಂದಿನ ಕಾಲದಲ್ಲಿ ಈ ದಿನಂದಂದು, ಅಕ್ಕಿ, ಚಿನ್ನದ ಶುಭ್ರ ನಾಣ್ಯವನ್ನು ಸೆರಗಿನ ಗಂಟಿನಲ್ಲಿ ಕಟ್ಟಿ 'ರಕ್ಷೆ' ಅಂದರೆ 'ರಾಖಿಯನ್ನು' ತಯಾರಿಸುತ್ತಿದ್ದರು.

ಏನ ಬದ್ಧೋ ಬಲಿ ರಾಜಾ ದಾನವೇಂದ್ರೋ ಮಹಾಬಲಃ |
ತೇನ ತ್ವಾಮಪಿ ಬಧ್ನಾಮಿ ರಕ್ಷೆ ಮಾ ಚಲ ಮಾ ಚಲ ||

ಅರ್ಥ : ಮಹಾಬಲಿ ಮತ್ತು ಮಹಾ ದಾನಿಯಾದ ಬಲೀ ರಾಜನು ಯಾವುದರಿಂದ ಬಂಧಿತನಾದನೋ, ಅದೇ ರಕ್ಷೆಯನ್ನು ನಾನು ನಿನಗೆ ಕಟ್ಟುತ್ತಿದ್ದೇನೆ. ಹೇ ರಾಖಿಯೇ ನೀನು ವಿಚಲಿತಳಾಗಬೇಡ.

ಸಹೋದರಿಯು ತನ್ನ ಸಹೋದರನ ಕೈಗೆ ಕಟ್ಟುವ ರಾಖಿಯ ಹಿಂದೆ ಸಹೋದರನ ಉತ್ಕರ್ಷವಾಗಲಿ ಮತ್ತು ಅವನು ತನ್ನ ರಕ್ಷಣೆ ಮಾಡಲಿ ಎಂಬ ಭಾವನೆಯು ಇರುತ್ತದೆ. ಒಬ್ಬ ಯುವಕ ಅಥವಾ ಪುರುಷನು ಓರ್ವ ಯುವತಿ ಅಥವಾ ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು, ಸಹೋದರಿಯು ತನ್ನ ಸಹೋದರನಿಗೆ ರಾಖಿ ಕಟ್ಟುವುದಕ್ಕಿಂತ ಹೆಚ್ಚಿನ ಮಹತ್ವದ್ದಾಗಿದೆ. ಇದರಿಂದ ಯುವಕರು ಮತ್ತು ಪುರುಷರು ಸ್ತ್ರೀಯರನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ.

ರಕ್ಷಾಬಂಧನದ ಉದ್ದೇಶ, ಅರ್ಥ ಮತ್ತು ಆಚರಿಸುವ ಕಾರಣಗಳು; ಮತ್ತು ರಾಖಿಯ ಮಹತ್ವ

೧. ಉದ್ದೇಶ

ಭಾರತೀಯ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಎಲ್ಲ ಉತ್ಸವಗಳಲ್ಲಿ 'ರಕ್ಷಾಬಂಧನ'ಕ್ಕೆಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ಈ ದಿನದಂದು ಸಹೋದರಿಯು ತನ್ನ ರಕ್ಷಣೆ ಮಾಡುವಂತೆ ಸಹೋದರನನ್ನು ದೃಢವಾದ ಬಂಧನದಲ್ಲಿ ಬಂಧಿಸುತ್ತಾಳೆ.

೨. ಅರ್ಥ ಮತ್ತು ಕಾರಣ

ಅ. ಸಹೋದರನು 'ಜನ್ಮ ಜನ್ಮಾಂತರಗಳಲ್ಲಿ ಸಹೋದರಿಯನ್ನು ರಕ್ಷಿಸುವೇನು', ಎಂದು ಹೇಳಿ, ಅದರ ಪ್ರತೀಕವಾಗಿ ಸಹೋದರಿಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುತ್ತಾನೆ. ಅಂತೆಯೇ ಅವನನ್ನು ವಚನಬದ್ಧನಾಗಿರಿಸಲು ಸಹೋದರಿಯು ರಾಖಿಯನ್ನು ಕಟ್ಟುತ್ತಾಳೆ. 'ಸಹೋದರ ಸಹೋದರಿಯು ಸದಾ ಈ ಬಂಧನದಲ್ಲಿರಲಿ' ಎಂದು ಈ ಹಬ್ಬವು ಅನಾದಿಕಾಲದಿಂದ ಪ್ರಚಲಿತವಾಗಿದೆ.
ಆ. ರಾಖಿಯು ಇವರ ಪವಿತ್ರ ಬಾಂಧವ್ಯದ ಪ್ರತೀಕವಾಗಿದೆ.
ಇ. ಹೇಗೆ ಸಹೋದರನು ತನ್ನ ಸಹೋದರಿಯ ರಕ್ಷಣೆಗೆ ವಚನಬದ್ಧನಾಗುತ್ತಾನೆಯೋ, ಸಹೋದರಿಯು ಕೂಡ 'ಸಹೋದರನ ರಕ್ಷಣೆಯಾಗಲಿ' ಎಂದು ಈಶ್ವರನ ಚರಣಗಳಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತಾಳೆ.

ರಾಖಿಯು ಹೇಗಿರಬೇಕು ?

ಚಿತ್ರ-ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಸಾತ್ವಿಕ ಮತ್ತು ಮನಸ್ಸಿಗೆ ಆಹ್ಲಾದಕರ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದದರೆ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮ) ಧರಿಸಿದವರ ಜೀವದ ಮೇಲೆ ಪರಿಣಾಮ ಬೀರುತ್ತವೆ.

ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸುವ ಹಿಂದಿನ ಉದ್ದೇಶ

ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.

ತುಪ್ಪದ ನಿಲಾಂಜನದಿಂದ ಆರತಿ ಬೆಳಗುವುದು

ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.

ಆರತಿಯ ತಟ್ಟೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಿರುವ ಕಾರಣ

ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ ತಮ ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.

ಸಹೋದರನಿಗೆ ರಾಖಿಯನ್ನು ಕಟ್ಟುವಾಗ ಸಹೋದರಿಯು ದ್ರೌಪದಿಯ ಭಾವವಿಟ್ಟುಕೊಂಡಿರಬೇಕು

ಶ್ರೀ ಕೃಷ್ಣನ ಬೆರಳಿನ ರಕ್ತಸ್ರಾವವನ್ನು ತಡೆಯಲು ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿದಳು. ಸಹೋದರಿಯು ತನ್ನ ಸಹೋದರನಿಗಾಗುವ ಕಷ್ಟವನ್ನು ಸಹಿಸುವುದಿಲ್ಲ. ಅವನ ಮೇಲೆ ಬಂದಿರುವ ಸಂಕಟವನ್ನು ದೂರ ಮಾಡಲು ಅವಳು ಎಲ್ಲವನ್ನು ಮಾಡಲು ಸಿದ್ಧವಾಗುತ್ತಾಳೆ. ರಾಖಿ ಹುಣ್ಣಿಮೆಯಂದು ಪ್ರತಿಯೊಬ್ಬ ಸಹೋದರಿಯು ರಾಖಿಯನ್ನು ಕಟ್ಟುವಾಗ ಇದೇ ಭಾವವನ್ನು ಇಟ್ಟುಕೊಳ್ಳಬೇಕು.

ರಕ್ಷಾಬಂಧನದಂದು ಸಹೋದರಿಯು ಯಾವುದೇ ಅಪೇಕ್ಷೆಗಳನ್ನು ಇಟ್ಟುಕೊಳ್ಳದೆ ರಾಖಿ ಕಟ್ಟುವುದರ ಮಹತ್ವ

ರಕ್ಷಾಬಂಧನದಂದು ಸಹೋದರಿಯು ತನ್ನ ಸಹೋದರನಿಂದ ಯಾವುದೇ ವಸ್ತುವನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡರೆ, ಆ ದಿನ ಪ್ರಾಪ್ತವಾಗುವ ಆಧ್ಯಾತ್ಮಿಕ ಲಾಭದಿಂದ ವಂಚಿತಳಾಗುತ್ತಾಳೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ಕಡಿಮೆಮಾಡಲು ಈ ದಿನವು ಮಹತ್ವದ್ದಾಗಿದೆ.

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಮಾಡಬೇಕಾದ ಪ್ರಯತ್ನಗಳು

ಅ. ಈ ದಿನವನ್ನು ನೆನಪಿಟ್ಟುಕೊಂಡು ಸಹೋದರ ಸಹೋದರಿಯ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸಬೇಕು
ಆ. ಸಮಾಜದಲ್ಲಿರುವ ಇತರರೊಂದಿಗಿರುವ ಬಾಂಧವ್ಯ ವೃದ್ಧಿಸಲು ಪ್ರಯತ್ನಿಸಬೇಕು
ಇ. ಈಶ್ವರನಲ್ಲಿರುವ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಬೇಕು

ಆಧಾರ : ಸನಾತನ ಪ್ರಕಾಶಿಸಿದ ಗ್ರಂಥ 'ಹಬ್ಬ,ಧಾರ್ಮಿಕ ಉತ್ಸವಗಳು ಮತ್ತು ವ್ರತಗಳು'