ಅಧ್ಯಾಪನವೆಂದರೆ ಸಾಧನೆ !

ಶಿಕ್ಷಣದ ಧ್ಯೇಯ ಮತ್ತು ಶಿಕ್ಷಣವನ್ನು ಸಾಧ್ಯಗೊಳಿಸುವ ವಿಷಯವನ್ನು ಮರೆತಿರುವ ಇಂದಿನ ಶಿಕ್ಷಣಪದ್ಧತಿ

ಶಿಕ್ಷಣದ ಧ್ಯೇಯ :
೧. ‘ವಿದ್ಯಾರ್ಜನೆ' ಶಿಕ್ಷಣದ ಮುಖ್ಯ ಉದ್ಧೇಶ
೨. ‘ಸಾವಿದ್ಯಾ ಯಾ ವಿಮುಕ್ತಯೇ' : ನಮ್ಮ ದುಃಖವನ್ನು ದೂರಗೊಳಿಸಿ ನಮಗೆ ನಿರಂತರ ಆನಂದ ಹೇಗೆ ಲಭಿಸುತ್ತದೆ, ಎಂಬುವುದರ ಜ್ಞಾನವು ಯಾವುದರಿಂದ ದೊರೆಯುವುದೋ, ಅದುವೇ ವಿದ್ಯೆ.

ಶಿಕ್ಷಣದಿಂದ ಸಾಧ್ಯಗೊಳ್ಳುವ ವಿಷಯಗಳು :
೧. ಜ್ಞಾನಸಂವರ್ಧನೆ ಮತ್ತು ಬುದ್ಧಿಯ ವಿಕಾಸ
೨. ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ನಿಪುಣತೆ
೩. ಜೀವನದಲ್ಲಿ ನೈತಿಕ ಮೌಲ್ಯಗಳ ಜೋಪಾಸನೆ ಮತ್ತು ಸಂವರ್ಧನೆ
೪. ಚಾರಿತ್ರ್ಯ ಸಂಪನ್ನ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದು
೫. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸುಧಾರಿಸುವುದು ಹಾಗೂ ಅದನ್ನು ಮುಂದಿನ ಪೀಳಿಗೆಗೆ ನೀಡುವುದು.
೬. 'ನಮ್ಮ ಜೀವನದ ಧ್ಯೇಯವೇನಿರಬೇಕು, ಅದನ್ನು ಹೇಗೆ ಸಾಧ್ಯಗೊಳಿಸಬೇಕು', ಎಂಬುದರ ಮಾರ್ಗದರ್ಶನ ಮಾಡುವುದು
೭. ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ ಬೆಳೆಸುವುದು

ಇಂದಿನ ಶಿಕ್ಷಣಪದ್ಧತಿ

ಜಾಣ ವಿದ್ಯಾರ್ಥಿಗಳು ಹೆಚ್ಚೆಚ್ಚು ಅಂಕಗಳನ್ನುಗಳಿಸಿ ಆಧುನಿಕ ವೈದ್ಯರು, ಅಭಿಯಂತರು, ಅಥವಾ ದೊಡ್ಡ ಅಧಿಕಾರಿಗಳಾಗಬಹುದು; ಆದರೆ ಅವರು ಸುಖಿಯಾಗಿ ಹಾಗೂ ಸಮಾಧಾನದಿಂದ ಇರುವರೆಂದು ಹೇಳಲು ಸಾಧ್ಯವಿಲ್ಲ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಹೆಚ್ಚೆಚ್ಚು ಅಂಕಗಳನ್ನುಗಳಿಸಿ ಅವರನ್ನು ಆಧುನಿಕ ವೈದ್ಯ, ಅಭಿಯಂತರ ಅಥವಾ ಇತರ ಒಳ್ಳೆಯ ವ್ಯವಸಾಯದಲ್ಲಿ ಹೇಗೆ ಪ್ರವೇಶ ನೀಡಬಹುದು, ಎಂಬುವುದರ ದಿಕ್ಕಿನಲ್ಲೇ ಪಾಲಕರ ಹಾಗೂ ವಿದ್ಯಾರ್ಥಿಗಳ ಗಮನವಿರುತ್ತದೆ. ಸಮಾಜ ಕೂಡ ಶಿಕ್ಷಣ ಸಂಸ್ಥೆಗಳ ಪರೀಕ್ಷೆಯ ಫಲನಿಷ್ಪತ್ತಿ ಶೇ. ಎಷ್ಟು ಬಂದಿದೆ, ಎಂಬುದರ ಆಧಾರ ಇಟ್ಟುಕೊಂಡು ಅದು ಯೋಗ್ಯವೇ ಅಯೋಗ್ಯವೆಂಬುದನ್ನು ನಿರ್ಣಯಿಸುತ್ತದೆ. ಈ ಅಂಕಗಳನ್ನುಗಳಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಉತ್ತರ ಬರೆಯುವ ನಿರಂತರ ಅಭ್ಯಾಸವನ್ನು ಮಾಡಿಸುವುದು, ನೋಟ್ಸ್ ನೀಡುವುದು, ಇತ್ಯಾದಿ ಮಾರ್ಗದಿಂದ ಮಾಡುತ್ತಿರುತ್ತಾರೆ. ಜಾಣ ವಿದ್ಯಾರ್ಥಿಗಳು ಬಹಳಷ್ಟು ಅಧ್ಯಯನ ಮಾಡಿರುವುದರಿಂದ ಹೆಚ್ಚು ಅಂಕಗಳನ್ನುಗಳಿಸಿ ಆಧುನಿಕ ವೈದ್ಯ, ಅಭಿಯಂತರ ಅಥವಾ ದೊಡ್ಡ ಅಧಿಕಾರಿಗಳಾಗುವರು ನಿಜ; ಆದರೆ ಅವರು ಸುಖ ಸಮಾಧಾನ ಹೊಂದುವರು, ಎಂಬುದರ ಭರವಸೆ ಇಲ್ಲ.

ಪ್ರತಿಯೊಂದು ಕೃತಿಯನ್ನು ಧರ್ಮದ ನಿಯಮಕ್ಕನುಸಾರವೇ ಮಾಡಬೇಕೆಂದು ಭಾರತೀಯ ಸಂಸ್ಕೃತಿ ಹೇಳುತ್ತದೆ : ಹಿಂದಿನ ಕಾಲದಲ್ಲಿ ಮಕ್ಕಳಿಗೆ ಉಪನಯನವಾದನಂತರ ಗುರುವಿನ ಸಾನಿಧ್ಯದಲ್ಲಿ ಧರ್ಮದ ಶಿಕ್ಷಣ ನೀಡಲಾಗುತ್ತಿತ್ತು. ಅವನ ಜೀವನದ ಧ್ಯೇಯವೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವುಗಳ ಪ್ರಾಪ್ತಿ ಎಂಬುದನ್ನು ಅವನ ಮನಸ್ಸಿನಲ್ಲಿ ಬಿಂಬಿಸಲಾಗುತ್ತಿತ್ತು. ಪ್ರತಿಯೊಂದು ಕೃತಿಯನ್ನೂ ಕೂಡ ಧರ್ಮದಲ್ಲಿ ಹೇಳಿದ ನಿಯಮದಂತೆಯೇ ಮಾಡಬೇಕು, ಎಂದು ಭಾರತೀಯ ಸಂಸ್ಕೃತಿ ಹೇಳುತ್ತದೆ.

ಅಧ್ಯಯನವನ್ನು ಸಾಧನೆಯೆಂದು ಮಾಡಲು ಪ್ರಾರಂಭಿಸಿದನಂತರ ಶಿಕ್ಷಕರು ಗಮನಿಸಬೇಕಾದ ವಿಷಯಗಳು.

ನಮ್ಮ ಆದರ್ಶವನ್ನು ವಿದ್ಯಾರ್ಥಿಗಳ ಮುಂದಿಡುವುದು : ಶಿಕ್ಷಕರು ಕೇವಲ ಉಪದೇಶ ಮಾಡದೆ ತನ್ನ ಸ್ವಂತ ವಿಚಾರಗಳು ಮತ್ತು ಆಚರಣೆಗಳು ಹೇಗಿರಬೇಕೆಂಬುದನ್ನು ಅಧ್ಯಯನ ಮಾಡಬೇಕು; ಏಕೆಂದರೆ ಎದುರಿಗಿರುವ ವಿದ್ಯಾರ್ಥಿ ಶಿಕ್ಷಕರ ಪ್ರತಿಯೊಂದು ಕೃತಿಯನ್ನು ಅನುಕರಣೆ ಮಾಡುತ್ತಿರುತ್ತಾನೆ. ಅದೇ ರೀತಿ ವರ್ತಿಸಲು ಪ್ರಯತ್ನಿಸುತ್ತಿರುತ್ತಾನೆ. ಆದ್ದರಿಂದ ಶಿಕ್ಷಕನ ಪ್ರತಿಯೊಂದು ಕೃತಿಯೂ ಆದರ್ಶವಾಗಿರಬೇಕು.

ಶಿಕ್ಷಕರು ತನ್ನ ಸ್ವಂತದ ಕೃತಿಯಿಂದ ವಿದ್ಯಾರ್ಥಿಗಳನ್ನು ತಯಾರಿಸುವುದು : ಉಪದೇಶ ಎಷ್ಟೇ ಚೆನ್ನಾಗಿದ್ದರೂ, ಅವರಿಗೆ ಆಹ್ವಾನ ಸಿಗುತ್ತದೆ; ಆದರೆ ಒಳ್ಳೆಯ ಕೃತಿಗೆ ಮಾತ್ರ ಯಾರೂ ಆಹ್ವಾನ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ತಮ್ಮ ಕೃತಿಯಿಂದ ವಿದ್ಯಾರ್ಥಿಗಳನ್ನು ತಯಾರಿಸಬೇಕು, ಉದಾ. ಶಿಕ್ಷಕರು, ತರಗತಿಯಲ್ಲಿ ಇತರ ಶಿಕ್ಷಕರು, ಅಧಿಕಾರಿ ಅಥವಾ ಇತರರು ಭೇಟಿಯಾಗಲು ಬಂದರೆ, ವಿದ್ಯಾರ್ಥಿಗಳಿಗೆ ನಮಸ್ಕಾರ ಮಾಡಲು ಕಲಿಸುತ್ತಾರೆ, ಆದರೆ ಅವರು ಸ್ವತಃ ನಮಸ್ಕಾರ ಮಾಡುವುದಿಲ್ಲ. ಅದೇ, ಶಿಕ್ಷಕರು ಹಾಗೆ ಕೃತಿ ಮಾಡಿದರೆ, ಹೆಚ್ಚು ಪ್ರಮಾಣದಲ್ಲಿ ವಿದ್ಯಾರ್ಥಿಗಳ ಮೇಲೆ ಅದರ ಪ್ರಭಾವ ಬೀರುತ್ತದೆ.

ಮಕ್ಕಳಿಗೆ ಪಠ್ಯೇತರ ವಿಷಯಗಳನ್ನು ಓದಲು ಹೇಳುವಾಗ ಶಿಕ್ಷಕರು ಯಾವುದೇ ಒಂದು ಪುಸ್ತಕದ ವಿಷಯಗಳನ್ನು ಹೇಳಿದರೆ, ಅವರಿಗೆ ಅದನ್ನು ಓದಲು ಆಸಕ್ತಿ ಬರುತ್ತದೆ.

ಕಲಿಸುವ ಎರಡು ಪದ್ಧತಿಗಳು

ತಾತ್ತ್ವಿಕ ಅಂಗ : ಪುಸ್ತಕದ ವಿಷಯಗಳನ್ನು ಓದಿ, ಕರಿಹಲಗೆ ಮತ್ತು ಸೀಮೆಸುಣ್ಣ ಇವುಗಳ ಸಹಾಯದಿಂದ, ಬಾಯಿಯಿಂದ ವಿವರಿಸಿ ಹೇಳುವುದು ಅಥವಾ ಯಾವುದೇ ಶೈಕ್ಷಣಿಕ ಸಾಹಿತ್ಯವನ್ನು ಸಿದ್ಧಪಡಿಸಿ ಅದರ ಮೂಲಕ ವಿವರಿಸಿ ಹೇಳುವ ಪ್ರಯತ್ನ ಮಾಡುವುದು. ಆದರೆ ಇಂದು ಮೊದಲನೇ ವಿಧಾನವೇ ಹೆಚ್ಚು ಪ್ರಯೋಗವಾಗುತ್ತದೆ.

ಪ್ರಾಯೋಗಿಕ ಅಂಗ : ಪ್ರತಿಯೊಂದು ಘಟಕವನ್ನು ಬಾಯಿಯಿಂದ ಹೇಳುವಾಗ ವಿದ್ಯಾರ್ಥಿಗಳಿಗೆ ಕೃತಿಯಿಂದ ಕಲಿಸಿದರೆ, ಅದು ಚೆನ್ನಾಗಿ ಅರ್ಥವಾಗುತ್ತದೆ.

ಸಂಸ್ಕಾರಗಳನ್ನು ಬೆಳೆಸುವ ವಿಷಯವನ್ನು ಹೇಳಿ ಅದರಿಂದ ಏನು ಬೋಧನೆ ಪಡೆಯಬೇಕೆಂಬುದನ್ನು ಹೇಳುವುದು.

ಶಿಕ್ಷಕರು ಪ್ರತಿಯೊಂದು ಘಟಕದ ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿಸಲು ಪ್ರಯತ್ನಿಸುವುದು. ಅಂದರೆ ಅದರಿಂದ ಜ್ಞಾನದ ಜೊತೆಗೆ ಸಂಸ್ಕಾರ ಮಾಡಲು ಕೂಡ ಸಾಧ್ಯವಾಗಬಹುದು, ಮನೋರಂಜನೆಯಿಂದ ಸಂಸ್ಕಾರ, ಜ್ಞಾನ ಇತ್ಯಾದಿ ವಿಷಯಗಳನ್ನು ಶಿಕ್ಷಕರು ಒಂದೇ ಬಾರಿ ಸಾಧ್ಯಗೊಳಿಸಬಹುದು.

ಸಂಸ್ಕಾರಕ್ಷಮ ವಯಸ್ಸು

ವಯಸ್ಸು ಕಡಿಮೆ ಇದ್ದಷ್ಟು ಸಂಸ್ಕಾರಗಳನ್ನು ಬಿಂಬಿಸಿಕೊಳ್ಳುವ ಕ್ಷಮತೆ ಹೆಚ್ಚಿರುತ್ತದ. ಸದ್ಗುಣಗಳನ್ನು ಬಾಲ್ಯಾವಸ್ಥೆಯಲ್ಲಿಯೇ ಗ್ರಹಿಸಲು ಸಾಧ್ಯವಾಗುತ್ತದೆ. ವಿಚಾರ ಮತ್ತು ಕೃತಿ ಚೆನ್ನಾಗಿ ಆಗಲು ಸಂಸ್ಕಾರಗಳ ಅವಶ್ಯಕತೆಯಿರುತ್ತದೆ. ಶಾಲೆಯ ವಯಸ್ಸು ಸಂಸ್ಕಾರಕ್ಕಾಗಿ ಯೋಗ್ಯವಾಗಿರುತ್ತದೆ ಎಂಬುದನ್ನು ಗಮನಿಸಿ ಶಿಕ್ಷಕರು ತಮ್ಮ ಕಾರ್ಯವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಶಿಕ್ಷಕರು ಸಮಾಜಋಣವನ್ನು ತೀರಿಸಬಹುದು. ಶಿಕ್ಷಕರು ಈ ಕರ್ಮವನ್ನು ತಮ್ಮ ಧರ್ಮವೆಂದು ಆಚರಿಸಿದರೆ, ಅಧ್ಯಾಪನವು ಸಾಧನೆಯಾಗುವುದು. ಅನ್ನದಾನ, ಸುವರ್ಣದಾನ ಇತ್ಯಾದಿಗಳಿಗಿಂತ ವಿದ್ಯಾದಾನವು ಸರ್ವಶ್ರೇಷ್ಠವಾಗಿದೆ.

ಒಳ್ಳೆಯ ಹವ್ಯಾಸಗಳು

ಯಾವುದೇ ವಿಷಯವನ್ನು ವಿತ್ತೀಯ ಉದ್ಧೇಶದಿಂದ ಮಾಡದೆ ಆ ವಿಷಯದಲ್ಲಿರುವ ಆಸಕ್ತಿಯಿಂದ, ಇಷ್ಟವಾಗುತ್ತದೆಯೆಂದು ಸಮಯವಿರುವಾಗ ಮಾಡುವಂತಹ ಕೃತಿ ಎಂದರೆ ಹವ್ಯಾಸ. ಇದರಿಂದ ಮಕ್ಕಳು ಸಮಯ ವ್ಯರ್ಥ ಮಾಡದೆ ಯಾವಾಗಲೂ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಾರೆ. ಅದರಿಂದ ಜೀವನ ಆನಂದಮಯ ಹಾಗೂ ಮನಸ್ಸು ಪ್ರಸನ್ನವಾಗಿರುತ್ತದೆ. ವಿದ್ಯಾರ್ಥಿಗಳ ಒಲವು ಹೇಗಿದೆಯೆಂದು ನೋಡಿ ಆಸಕ್ತಿಯನ್ನು ಜೋಪಾನ ಮಾಡಲು ಪ್ರೋತ್ಸಾಹ ನೀಡಬೇಕು. ಇದೆಲ್ಲವನ್ನು ಮಾಡಲು ಶಿಕ್ಷಕರಿಗೆ ತಪಶ್ಚರ್ಯ ಅಂದರೆ ಸಾಧನೆ ಮಾಡಬೇಕಾಗುವುದು.

– ಶ್ರೀಮತಿ ವಂದನಾ ಕರಚೆ (ಶಿಕ್ಷಕಿ), ಪಿಂಪ್ರಿ, ಪುಣೆ.